ಕಮಲ ಹುಟ್ಟಬೇಕು

ಬಾಳಲಿ ಕೆಸರೇ ತುಂಬಿಹುದೂ
ಕಮಲ ಹುಟ್ಟಬೇಕು
ಅಂಧಕಾರದಲಿ ಅಜ್ಞತೆ ತುಂಬಿದೆ
ಜ್ಞಾನ ತಾರೆ ಬೇಕು || ೧ ||

ಜೀವರಾಶಿಗಳ ದೂರ ಪಯಣದಲಿ
ಮನುಜ ಕೊನೆಗೆ ಬಂದ
ಕೋಟಿ ಜನುಮಗಳ ಸಮುದ್ರ ಮಥನದಿ
ಅಮ್ಮತವನ್ನೆ ತಂದ || ೨ ||

ವಿಷಯಸಾಗರದಿ ವಿಷದ ಭೋಗದಲಿ
ಜೀವ ಕೊಡುವ ಫಲವು
ಹುಟ್ಟು ಸಾವುಗಳ ಬಾಳ ಜೂಜಿನಲಿ
ಉಳಿಯುವಂಥ ಛಲವು || ೩ ||

ಪ್ರಾಣಿ ನೂರರೊಲು ಹುಟ್ಟುಗುಣಗಳ
ಸೃಷ್ಟಿವೃತ್ತ ಒಳಗೆ
ಕಟ್ಟು ಹಾಕಿ ಮಾನವತೆ ನವ್ಯತೆಯ
ವಸ್ತ್ರ ಮೇಲೆ ಹೊರಗೆ || ೪ ||

ಕಮಲ ಕೆಸರಿನಲೆ ಹುಟ್ಟಿ ಬಂದರೂ
ಕೆಸರೆ ಅಲ್ಲವಲ್ಲ
ದೇಹದಿಂದಲೆ ಆತ್ಮ ಬೆಳಗುವುದು
ದೇಹವಲ್ಲ ಎಲ್ಲಾ || ೫ ||

ಇಂಥ ಪದ್ಮವನು. ನೋಂತು ಯುಗಗಳಲಿ
ಭೂಮಿ ತಾಯಿ ತಾನು
ಎನಿತೊ ನೋವುಗಳ ಕಷ್ಟರಾಶಿಗಳ
ಉಂಡು ಪಡೆದಳದನು || ೬ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರುದಾಕಿ
Next post ಹಿಂದೂಮುಸಲ್ಮಾನರ ಐಕ್ಯ – ೧

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys